Nov 06: ಶಾಲಾ ಸಂಚಾಲಕಿಯವರಾದ ಸಿಸ್ಟರ್ ಸೈಮನ್ ಮತ್ತು ಮುಖ್ಯಶಿಕ್ಷಕಿಯರಾದ ಸಿಸ್ಟರ್ ಬೆಟ್ಟಿಯವರ ಸಹಕಾರದೊಂದಿಗೆ ದಿನಾಂಕ 05-11-2018 ರಂದು ಸಂತ ಜೋಸೆಫರ ಪ್ರೌಢಶಾಲೆ, ಕೆ.ಆರ್.ನಗರದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂಬ ನುಡಿಯೊಂದಿಗೆ, ಹಾಗೂ ತಮಸೋಮ ಜ್ಯೋತಿರ್ಗಮಯ ಎಂಬ ವಾಕ್ಯದೊಂದಿಗೆ ಶಾಲೆಯ ಸಂಚಾಲಕಿ, ಮುಖ್ಯಶಿಕ್ಷಕಿಯರಾದ ಹಾಗೂ ಶಿಕ್ಷಕ ವೃಂದದವರು ಕನ್ನಡದ ದೀಪವನ್ನು ಬೆಳಗಿಸಿದರು.

ನಮ್ಮ ನಾಡು, ನುಡಿ ಮತ್ತು ಸಂಸ್ಕøತಿಯ ಬಗ್ಗೆ ಕನ್ನಡದ ಕಂಪನ್ನು ಸೂಸಲು 10ನೇ ತರಗತಿ ಕನ್ನಡ ಮಾಧ್ಯಮದ ಮಕ್ಕಳು ಮತ್ತು ವರ್ಗದ ಶಿಕ್ಷಕರಾದ ಶ್ರೀಮತಿ ಮಂಜುಳರವರ ಸಾರಥ್ಯದಲ್ಲಿ ಬಹಳ ವಿಜೃಂಭಣೆಯಿಂದ ಕರ್ನಾಟಕದ ಕಹಳೆಯನ್ನು ಊದಿದರು.

ಸಾಂಸ್ಕøತಿಕ ಕಾರ್ಯಕ್ರಮಗಳು ನೃತ್ಯ, ನಾಟಕ ಮತ್ತು ಸಂಗೀತಗಳು ಕನ್ನಡದ ಹೆಮ್ಮೆಯನ್ನು ಸಾರುವಂತೆ ಇದ್ದವು.

 

 

 

 

 

 

ಶ್ರೀಮತಿ. ಮಂಜುಳ, ಸಹಶಿಕ್ಷಕಿ
ಸಂತ ಜೋಸೆಫರ ಪ್ರೌಢಶಾಲೆ, ಕೆ.ಆರ್.ನಗರ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]