October 08: 2019ನೇ ಸಾಲಿನ ನಾಡಹಬ್ಬ ದಸರಾ ಮಹೋತ್ಸವ-2019ರ ಮಕ್ಕಳ ದಸರಾ ಪ್ರಯುಕ್ತ ದಿನಾಂಕ 30.09.2019 ಹಾಗೂ 01.10.2019 ರಂದು ಜಗನ್ಮೋಹನ ಆರಮನೆ ಸಭಾಂಗಣದಲ್ಲಿ ಮಕ್ಕಳ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಅಶುಭಾಷಣ ಸ್ಪರ್ಧೆಯಲ್ಲಿ 9ನೇ  ತರಗತಿಯ ರಕ್ಷ  ಹಾಗೂ ವಿವಿಧ ವೇಷ ಸ್ಪರ್ಧೆಯಲ್ಲಿ ಧನ್ಯಾ ದ್ವೀತಿಯ ಸ್ಥಾನವನ್ನು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಶರಣ್ಯ ಹಾಗೂ ವಿಧಾತ್ರಿ  ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ ವಿಜ್ಞಾನ ವಸ್ತು ಪ್ರದರ್ಶನವನ್ನು ಮಾನ್ಯ ಶಿಕ್ಷಣ ಸಚಿವರಾದ ಶ್ರೀಯುತ ಸುರೇಶ್ ಕುಮಾರ್ ರವರು ವೀಕ್ಷಿಸಿ ವಿದ್ಯಾರ್ಥಿಗಳಾದ ಪ್ರತೀಕ್ಷಾ ಹಾಗೂ ರುಚಿತಾ ರವರನ್ನು ಪ್ರಶಂಸಿರುತ್ತಾರೆ.

ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯಶಿಕ್ಷಕಿಯವರಾದ ಸಿಸ್ಟರ್ ಬೆಟ್ಟಿ ರವರು ಹಾಗೂ ಶಿಕ್ಷಕ ವರ್ಗದವರು ಅಭಿನಂದಿಸಿರುತ್ತಾರೆ.

                                          

 

ವೀಣಾ ಹೆಚ್ ಎಸ್, ಸಹ ಶಿಕ್ಷಕರು
ಸಂತ ಜೋಸೆಫರ ಪ್ರೌಢಶಾಲೆ, ಕೃಷ್ಣರಾಜನಗರ, ಮೈಸೂರು ಜಿಲ್ಲೆ