Aug 25: ದಿ. 20.08.2018 ರಂದು ಬ್ರದರ್ ಇಗ್ನೇಷಿಯಸ್ ಅವರು ಬೆಥನಿ ಪ್ರೌಢ ಶಾಲೆ, ಚಿತ್ತಾಪೂರಗೆ ಆಗಮಿಸಿ ಮಕ್ಕಳಿಗೆ ದೈವಾನುಭವ ನುಡಿಗಳನ್ನು ಬಹಳ ಪರಿಣಾಮಕಾರಿಯಾಗಿ ಹೇಳಿದರು.

ರೋನಾಲ್ಡ ಎಂಬ ಅನಾಥ ಮಗುವಿನ ಸತ್ಯಕಥೆಯನ್ನು ಹೇಳಿವುದರ ಮೂಲಕ ನಾವು ನಮ್ಮನ್ನು ಸಂಪೂರ್ಣವಾಗಿ ದೇವರಿಗೆ ಸಮರ್ಪಿಸಿದಾಗ ಮಾತ್ರ ದೇವರ ರಕ್ಷಣೆ ನಮಗೆ ಸಿಗಲು ಸಾಧ್ಯ ಎಂಬುದನ್ನು ಎಲ್ಲರಿಗೂ ಮನದಟ್ಟು ಮಾಡಿಸಿದರು.

ಮಕ್ಕಳು ಶಿಕ್ಷಣದಲ್ಲಿ ಚೆನ್ನಾಗಿ ಆಸಕ್ತಿ ವಹಿಸಿ ಕಲಿಯಬೇಕು ಎಂಬ ವಿಷಯವನ್ನು ಬೈಬಲ್‍ನಲ್ಲಿರುವ ಕೆಲವು ವಾಕ್ಯಗಳನ್ನು ಹೇಳುತ್ತ ಮಕ್ಕಳಿಗೆ ತಿಳಿಸಿ ಹೇಳುವುದರ ಜೊತೆಗೆ ಕ್ಷಮಿಸು, ಪ್ರೀತಿಸು, ಪ್ರಾರ್ಥಿಸು ಎಂಬ ಮೌಲ್ಯಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿವರಿಸಿದರು.

 

 

ಶ್ರೀಮತಿ ಅರ್ಚನಾ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]