Sep 18: ಉತ್ತರ ಕರ್ನಾಟಕದ ಆರು ಜಿಲ್ಲೆಗಳನ್ನು ಹೊಂದಿರುವ ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದ ವಿಮೋಚನಾ ದಿನಾಚರಣೆ ಅಂಗವಾಗಿ ದಿ.17.09.2018ರ ಸೋಮವಾರದಂದು ಬೆಳಿಗ್ಗೆ 7.45ನಿಮಿಷಕ್ಕೆ ಸರದಾರ ವಲ್ಲಭಭಾಯಿ ಪಟೇಲ ಅವರ ಭಾವಚಿತ್ರಕ್ಕೆ ಅತಿಥಿ ಗಣ್ಯರು ಗೌರವವನ್ನು ಸಲ್ಲಿಸಿದರು. ಹಾಗೂ ಸಿ.ಲೂಸಿಕ್ಲೇರ್ ಅವರು ಧ್ವಜಾರೋಹಣ ಮಾಡಿದರು. ಜೊತೆಗೆ ಇದೇ ದಿನದಂದು ವಿಶ್ವಕರ್ಮ ಜಯಂತಿಯನ್ನು ಕೂಡ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ.ಲೂಸಿ ಕ್ಲೇರ್, ಬೆಥನಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ.ಕವಿತಾ ಹಾಗೂ ಸಿ.ಬಿಯಾನಾ ಅವರು ವೇದಿಕೆಯ ಸ್ಥಾನಗಳನ್ನು ಅಲಂಕರಿಸಿದ್ದರು. ಅಲ್ಲದೇ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಬಗ್ಗೆ ಮತ್ತು ವಿಶ್ವಕರ್ಮ ಜಯಂತಿಯ ಬಗ್ಗೆ ವಿದ್ಯಾರ್ಥಿಗಳು ಮಾತನಾಡಿ ದಿನಾಚರಣೆಗಳ ವಿಶೇಷತೆಯಗಳನ್ನು ತಿಳಿಸಿದರು.

 

 

ಶ್ರೀಯುತ ಬಸವರಾಜ ಸಹ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]