Sep 28: ದಿನಾಂಕ 26 ಆಗಸ್ಟ 2019 ರಂದು ಬೆಥನಿ ಪ್ರೌಢ ಶಾಲೆ, ಚಿತ್ತಾಪೂರದಲ್ಲಿ 10ನೇ ತರಗತಿಯ ಆಂಗ್ಲ ಮತ್ತು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪಾಲಕ-ಪೋಷಕರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ.ಕವಿತಾ ರವರು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಹಶಿಕ್ಷಕರಾದ ಶ್ರೀಯುತ ಬಸವರಾಜ ಪೂಜಾರಿಯವರು ವೇದಿಕೆಯ ಮೇಲಿದ್ದರು. ಕಾರ್ಯಕ್ರಮವನ್ನು ಪ್ರಾರ್ಥನೆ ಗೀತೆಯ ಮೂಲಕ ಆರಂಭಿಸಲಾಯಿತು.

ಸಭೆಯನ್ನು ಕುರಿತು 10ನೇ ತರಗತಿಯ ಮಹತ್ವವನ್ನು ಹಾಗೂ ಮಕ್ಕಳ ಅಭಿವೃದ್ದಿಗಾಗಿ ಪಾಲಕ-ಪೋಷಕರ ಜವಾಬ್ದಾರಿಯನ್ನು ಕುರಿತು ಬಸವರಾಜ ಪೂಜಾರಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಿ.ಕವಿತಾರವರು ಮಕ್ಕಳಿಗೆ ಮನೆಯಲ್ಲಿ ಶಿಸ್ತಿನಿಂದ ಬೆಳೆಸುವಂತೆ ಹಾಗೂ ಅವರ ವಿದ್ಯಾಭ್ಯಾಸದ ಕಡೆ ಗಮನಹರಿಸುವಂತೆ ತಿಳಿಸಿದರು. ನಂತರ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಶಿಕ್ಷಕರ ಜೊತೆ ಚರ್ಚಿಸಿದರು.

 

 

ಶ್ರೀಯುತ ಬಸವರಾಜ ಪೂಜಾರಿ, ಸಹ-ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ