Print

Nov 20: ರಾಮಾಯಣ ಮಹಾಕಾವ್ಯ ಬರೆದ ಆದಿಕವಿ ಎನಿಸಿರುವ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ದಿನಾಂಕ 31.10.2020ರ ಶನಿವಾರದಂದು ಎರಡೂ ಶಾಲೆಗಳ ಶಿಕ್ಷಕವೃಂದ ಜೊತೆಗೂಡಿ ಆಚರಿಸಲಾಯಿತು. ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಅತಿಥಿ ವೃಂದ ಪೂಜೆ ಸಲ್ಲಿಸುವುದರ ಜೊತೆಗೆ ಅವರ ಜೀವನ ಚರಿತ್ರೆಯನ್ನು ಇಬ್ಬರು ಶಿಕ್ಷಕರು ಸವಿವರವಾಗಿ ತಮ್ಮ ಭಾಷಣದಲ್ಲಿ ಎಲ್ಲರ ಮನಮುಟ್ಟುವಂತೆ ಹೇಳಿದರು. ಪ್ರಾರಂಭದಲ್ಲಿ ಅತೀ ಕ್ರೂರಿಯಾಗಿದ್ದ ವಾಲ್ಮೀಕಿ ತನ್ನತ್ತ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದ ಮಹಾನ್ ವ್ಯಕ್ತಿತ್ವ ಅವರದ್ದಾಗಿತ್ತು ಎಂಬ ಆಶಯದ ಮಾತುಗಳೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

ಶ್ರೀಮತಿ ಸುಷ್ಮಾ, ಸಹಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ