“ಕುಲ, ಕುಲ, ಕುಲ, ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನೇನಾದರು ಬಲ್ಲಿರಾ, ಬಲ್ಲಿರಾ?” ಎಂದು ಜಾತಿಮತದ ವಿರುದ್ಧ ಧ್ವನಿಯೆತ್ತಿದ ದಾಸ ಶ್ರೇಷ್ಟರಲ್ಲಿ ಒಬ್ಬರಾದ ಕನಕದಾಸರ 533 ನೇ ಜಯಂತಿಯನ್ನು ದಿನಾಂಕ 03.12.2020ರ ಗುರುವಾರದಂದು ಬೆಳಿಗ್ಗೆ 10.00ಗಂಟೆಗೆ ಸರಿಯಾಗಿ ಶಿಶುವಿಹಾರ ಹಿರಿಯ ಪ್ರಾಥಮಿಕ ಹಾಗೂ ಬೆಥನಿ ಪ್ರೌಢ ಶಾಲೆಯ ಸಿಬ್ಬಂದಿಯವರೊಟ್ಟುಗೂಡಿ ಆಚರಿಸಲಾಯಿತು. ಈ ಕಾರ್ಯಕ್ರಮದ ಅತಿಥಿಗಳಾಗಿ ಎರಡೂ ಶಾಲೆಗಳ ಮುಖ್ಯಗುರುಗಳು ಭಾಗವಹಿಸಿದರು. ಶ್ರೀಮತಿ ಸುಷ್ಮಾ ಟೀಚರ್‍ರವರ ಅರ್ಥಪೂರ್ಣ ನಿರೂಪಣೆಯೊಂದಿಗೆ, ಶ್ರೀಮತಿ ನಿಖತ್ ಹಾಗೂ ಶ್ರೀಯುತ ಭೀಮರಾವರವರು ಭಾಷಣಗಳ ಮೂಲಕ ಕನಕದಾಸರ ಜೀವನದ ಕುರಿತು ಸಂಕ್ಷಿಪ್ತವಾದ ಮಾಹಿತಿಯನ್ನು ವ್ಯಕ್ತಪಡಿಸಿದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.


 

ಸಿ.ಕವಿತಾ ಬಿಎಸ್, ಮುಖ್ಯೋಪಾಧ್ಯಾಯರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ