ಬೆಥನಿ ಪ್ರೌಢ ಶಾಲೆಯಲ್ಲಿ 2021-22ನೇ ಶೈಕ್ಷಣಿಕ ಸಾಲಿನ ಮಂತ್ರಿಮಂಡಲವನ್ನು ದಿನಾಂಕ 12.11.2021 ರಂದು ರಚಿಸಲಾಯಿತು. ಆಯ್ಕೆಯಾದ ಮಂತ್ರಿಮಂಡಲದ ಸದಸ್ಯರನ್ನು ನಮ್ಮ ಶಾಲೆಯ ಮುಖ್ಯೋಪಾಧ್ಯಾಯಿನಿಯರು ಮಾರ್ಗದರ್ಶನ ನೀಡಿದರು. ಅವರವರ ಜವಾಬ್ದಾರಿಗಳನ್ನು ಹಂಚಿಕೊಟ್ಟರು. ಅವರಲ್ಲಿ ಕೆಲವರನ್ನು ಸಾಂಸ್ಕøತಿಕ, ಶೈಕ್ಷಣಿಕ, ಕ್ರೀಡಾ, ಶಿಸ್ತಿನ ಇತ್ಯಾದಿ ಕ್ಷೇತ್ರಗಳ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

ಕಾರ್ಯಕ್ರಮವನ್ನು ಏರ್ಪಡಿಸಿ ಮಂತ್ರಿಗಳಿಗೆ ಶ್ರೀಯುತ ವಿಶ್ವನಾಥ ಸರ್ ಅವರು ಪ್ರತಿಜ್ಞೆ ಮಾಡಿಸುವುದರ ಮೂಲಕ ಪ್ರತಿಜ್ಞಾವಿಧಿಯನ್ನು ನೆರವೇರಿಸಿಕೊಟ್ಟರು. ಶ್ರೀಯುತ ಶೇಷಪ್ಪ ಸರ್ ಅವರು ನಾಯಕನ ಗುಣಲಕ್ಷಣಗಳನ್ನು ವಿವರಿಸಿದರು.


ಜೊತೆಗೆ ಆಯ್ಕೆಯಾದ ಮಕ್ಕಳೆಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತ ಮುಖ್ಯೋಪಾಧ್ಯಾಯಿನಿಯರ ಜೊತೆ ಎಲ್ಲ ಶಿಕ್ಷಕರಿಗೆ ವಂದನೆಗಳನ್ನು ಸಲ್ಲಿಸಿದರು.

 

 

 

 

 

ಶ್ರೀಯುತ ವಿಶ್ವನಾಥ ಕುಂಬಾರ, ದೈಹಿಕ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ