Oct 02 : ದಿನಾಂಕ 25.08.2023 ರ ಶುಕ್ರವಾರ ಮಧ್ಯಾಹ್ನ 3.00 ಗಂಟೆಗೆ ಸರಿಯಾಗಿ ಶ್ರೀಯುತ ರುದ್ರಪ್ಪ ಸರ್ ಅವರಿಂದ ಮಕ್ಕಳಿಗೆ ಸಮಾಜದಲ್ಲಿ ನಡೆಯುತ್ತಿರುವ ಮಾನವ ಕಳ್ಳ ಸಾಗಾಣಿಕೆ ಎಂಬ ಭಯಂಕರ ಪಿಡುಗಿನ ಬಗ್ಗೆ ಅರಿವು ಕೊಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಕುಮಾರಿ ಅರುಣಾ, ಸಹಶಿಕ್ಷಕಿ ಸ್ವಾಗತ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಯುತ ರುದ್ರಪ್ಪ ಸರ್ ಅವರು ಮಾನವ ಕಳ್ಳ ಸಾಗಾಣಿಕೆಯ ಅರ್ಥ, ಉದ್ದೇಶ, ಕಾರಣಗಳು, ವಿಧಾನಗಳು ಇತ್ಯಾದಿ ತಿಳಿಸುತ್ತ ಮಾನವ ಸಾಗಾಣಿಕೆ ತಡೆಗಟ್ಟುವ ಅಂಶಗಳನ್ನು ಮಕ್ಕಳಿಗೆ ಸೂಕ್ಷ್ಮವಾಗಿ ತಿಳಿಸಿಕೊಟ್ಟರು. ಮಕ್ಕಳ ಅರಿವಿಗೆ ಬರದ ವಿಷಯವನ್ನು ಮುನ್ನೆಚ್ಚರಿಕೆಯಾಗಿ ಜೀವನ ಸಾಗಿಸುವ ವಿಧಾನವನ್ನು ಮನೋಜ್ಞವಾಗಿ ವಿವರಿಸಿದರು.
ಕುಮಾರಿ ಅರುಣಕುಮಾರಿ, ಸಹಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ
Comments powered by CComment