June 22: ದಿ.15-6-2018 ರಂದು ಧಾರವಾಡದ, ಪ್ರಸೆಂಟೇಷನ್ ಬಾಲಕಿಯರ ಪ್ರೌಢ ಶಾಲೆಯಲ್ಲಿ 2018-19 ಸಾಲಿನ "ಶಾಲಾ ಸಂಸತ್ತ"ನ್ನು ಉದ್ಘಾಟಿಸಲಾಯಿತು. ಹೊಸದಾಗಿ ಆಯ್ಕೆಯಾದ ನಾಯಕಿ ಮತ್ತು ಉಪನಾಯಕಿಯರುಗಳಿಗೆ ಮಾನ್ಯ ಮುಖ್ಯೋಪಾಧ್ಯಾಯಿನಿಯರಾದ ಸಿ.ಸ್ಯಾಲಿ ಬಿ ಎಸ್ ರವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ನಂತರು ಅವರು ಮಾತನಾಡಿ, ಮಂತ್ರಿ ಮಂಡಲದ ಸರ್ವ ಸದಸ್ಯರುಗಳು ಶಾಲಾ ಅವಧಿಯಲ್ಲಿ ನಿರ್ವಹಿಸಬೇಕಾದ  ಕಾರ್ಯ ಮತ್ತು ಕರ್ತವ್ಯಗಳನ್ನು ವಿವರಿಸಿದರು.

ಶಿಕ್ಷಕರಾದ ಸ್ಯಾಮ್ಯುಯಲ್ ರವರು ಮಾತನಾಡಿ, ಭಾರತದ ಸಂವಿಧಾನವು ಹಲವು ದೇಶಗಳಿಗೆ ಮಾದರಿ ಸಂವಿಧಾನವಾಗಿದೆ. ಇಲ್ಲಿ ಪ್ರಜೆಗಳೇ ಪ್ರಭುಗಳಾದ್ದರಿಂದ ದೇಶದ ಏಳ್ಗೆ  ಮತ್ತು ಸುಲಭ ಆಡಳಿತಕ್ಕೆ ಪ್ರಜಾಪ್ರಭುತ್ವ ಸರ್ಕಾರವು ಸಹಕಾರಿಯಾಗಿದೆ, ಎಂದು ಹೇಳಿದರು.
ಕಾರ್ಯಕ್ರಮವನ್ನು ರಾಷ್ಟ್ರ ಗೀತೆಯೊಂದಿಗೆ ಸಮಾರೋಪಗೊಳಿಸಲಾಯಿತು.

ಚಂದ್ರಪ್ಪ. ಕುರಿ.
ಪ್ರಸೆಂಟೇಷನ್ ಬಾಲಕಿಯರ ಪ್ರೌಢ ಶಾಲೆ, ಧಾರವಾಡ.

 

 

 

 

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]